‘ರಾಜ್ಯದಲ್ಲಿ 1995ಕ್ಕೂ ಮೊದಲು ಆರಂಭವಾಗಿರುವ ಶಾಲೆಗಳ ಪೈಕಿ 800 ಶಾಲೆಗಳಿಗೆ ಅನುದಾನ ನೀಡಲು ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಉಳಿದಿರುವ 68 ಶಾಲೆಗಳಿಗೆ ಅನುದಾನ ನೀಡುವಂತೆ 2017ರ ಸೆಪ್ಟೆಂಬರ್ 27ರಂದು ನಡೆದಿದ್ದ ಸಭೆಯಲ್ಲಿ ಮುಖ್ಯಮಂತ್ರಿ ಆದೇಶಿಸಿದ್ದರು. ಅನುದಾನ ಸಂಬಂಧದ ಕಡತಗಳಿಗೆ ಶಿಕ್ಷಣ ಇಲಾಖೆ ಒಪ್ಪಿಗೆ ನೀಡಿ ಹಣಕಾಸು ಇಲಾಖೆಗೆ ಕಳಿಸಿದೆ. ಆದರೆ, ಈ ಕಡತಗಳಿಗೆ ಹಣಕಾಸು ಇಲಾಖೆ ಅನುಮೋದನೆ ನೀಡದೆ ವಿಳಂಬ ಮಾಡುತ್ತಿದೆ’ ಎಂದು ಒಕ್ಕೂಟದ ಸದಸ್ಯ ಯಶವಂತ್ ದೂರಿದ್ದಾರೆ.