ಕಂಪನಿ ಖೊಟ್ಟಿ ಅಡ್ರೆಸ್ ನೀಡಿ ಟೆಂಡರ್ ಪಡೆಯಲಾಗಿದೆ ಇದರಲ್ಲಿ ಸಾವಿರ ಕೋಟಿ ಲೂಟಿ ಮಾಡುತ್ತಿದ್ದಾರೆ. ಗುತ್ತಿಗೆ ಪಡೆಯಲು ಸಿಂಗಾಪುರ ಬ್ಯಾಂಕ್ ನಿಂದ ಇಎಂಡಿ ಗ್ಯಾರಂಟಿ ನೀಡಲಾಗಿದೆ. ಆದರೆ ವಾಸ್ತವದಲ್ಲಿ ಆ ಬ್ಯಾಂಕ್ ಸಿಂಗಪುರದಲ್ಲೇ ಇಲ್ಲ. ₹ 5 ಸಾವಿರ ಕೋಟಿ ಹಣವನ್ನ ಲೂಟಿ ಮಾಡಲು ಹೊರಟಿದ್ದಾರೆ. ಅತ್ಯಂತ ಕಡಿಮೆ ಬೆಲೆಗೆ ತಮಿಳುನಾಡು, ಮಲೇಷ್ಯಾದಿಂದ ಮರಳು ಆಮದು ಮಾಡಿಕೊಳ್ಳುತ್ತಿದೆ.