9 ತಿಂಗಳಿಂದ ಸಂಬಳವೇ ಇಲ್ಲ: ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸ್ಥಳ ನೀಡಿ ಗುತ್ತಿಗೆ ನೌಕರರಾಗಿ ದುಡಿಯುವ ಸಂತೋಷ್ ಕುಮಾರ್, ಮಹದೇವಸ್ವಾಮಿ, ಜಗದೀಶ್, ಎಂ.ಬಿ.ಚಂದ್ರಶೇಖರಮೂರ್ತಿ, ಬಸವರಾಜು ಹಾಗೂ ರಘುಪತಿ 9 ತಿಂಗಳಿಂದ ಸಂಬಳ ಇಲ್ಲದೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲಾಧಿಕಾರಿಗೆ ಹಾಗೂ ವಿವಿಧ ಸಭೆಗಳಲ್ಲಿ ಮನವಿ ಸಲ್ಲಿಸಿದ್ದರೂ ಸಂಬಳ ನೀಡಿಲ್ಲ ಎಂದರು. ಜಿ.ಪಂ.ಉಪಾಧ್ಯಕ್ಷ ಜೆ.ಯೋಗೇಶ್ ಗೋವಿಂದಶೆಟ್ಟಿ, ಪ್ರಕಾಶ್ ಮುಖ್ಯಾಧಿ ಕಾರಿ ಎಸ್.ಉಮಾಶಂಕರ ಹಾಜರಿದ್ದರು.