ಪಕ್ಷದ ಮುಖಂಡ ಅಜಯ್ ಕುಮಾರ್ ಮಾತನಾಡಿ, ಜವನ ಗೊಂಡನಹಳ್ಳಿ ಹೋಬಳಿಯ 45 ಹಳ್ಳಿಗಳಿಗೆ ಗಾಯತ್ರಿ ಜಲಾಶಯದಿಂದ ಶಾಶ್ವತ ಕುಡಿಯುವ ನೀರು ಹಾಗೂ ಐಮಂಗಲ ಹೋಬಳಿಯ 74 ಹಳ್ಳಿಗಳಿಗೆ ವಿ.ವಿ ಜಲಾಶಯದಿಂದ ಪೈಪ್ಲೈನ್ ಮೂಲಕ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳು ಒಂದೆರಡು ತಿಂಗಳಲ್ಲಿ ಮುಗಿಯಲಿವೆ. ಪಕ್ಷದಲ್ಲಿ ಭಿನ್ನಾಭಿಪ್ರಾಯಕ್ಕೆ, ಅಪಸ್ವರದ ಮಾತುಗಳಿಗೆ ಆಸ್ಪದ ಕೊಡದೆ ಸುಧಾಕರ ಅವರ ಗೆಲುವಿಗೆ ಒಗ್ಗಟ್ಟಿ ನಿಂದ ಶ್ರಮಿಸೋಣ ಎಂದರು.ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಲತಾ ಮಾತನಾಡಿದರು. ದಾದಾಪೀರ್, ಇ.ಮಂಜುನಾಥ್, ಸಾದತ್ ವುಲ್ಲಾ, ಪುರುಷೋತ್ತಮ್, ದಲೀಚಂದ್. ವಾಸುದೇವ್, ರವಿಚಂದ್ರನಾಯ್ಕ, ಲಕ್ಷ್ಮೀದೇವಿ, ತಿಪ್ಪಮ್ಮ, ಅಬ್ಬಾಸ್, ಬಿ.ಎನ್. ಪ್ರಕಾಶ್, ಮಹಂತೇಶ್ ಉಪಸ್ಥಿತರಿದ್ದರು.