ಅಲ್ಲದೆ, ಗ್ರಾಮಸ್ಥರು ಸಚಿವರಿಗೂ ಮನವಿ ಸಲ್ಲಿಸಿದ್ದೆವು. ಅವರು ಅಧಿಕಾರಿಗಳಿಗೆ ಹೇಳಿದರೇ ವಿನಃ, ಇದರ ಬಗ್ಗೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ, ಗ್ರಾಮದ ಸಮಸ್ಯೆ ನಿವಾರಣೆಗೆ ಗ್ರಾಮಸ್ಥರೇ ಮುಂದಾಗಿದ್ದು, ಕಳೆದ ವಾರ ಸುಮಾರು 75 ಲೋಡ್ನಷ್ಟು ಮಣ್ಣನ್ನು ಹಳ್ಳಕ್ಕೆ ಹಾಕಲಾಗಿದೆ. ಮಣ್ಣು ಕುಳಿತ ನಂತರ, ನೀರು ಸರಾಗವಾಗಿ ಹರಿಯಲು ದೊಡ್ಡ ಕೊಳವೆಗಳನ್ನು ಹಾಕಿ, ಅದರ ಮೇಲೆ ರಸ್ತೆ ಮತ್ತು ಸೇತುವೆಯನ್ನು ನಿರ್ಮಿಸಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ ಎಂದು ಗ್ರಾಮಸ್ಥರಾದ ರಾಜಶೇಖರ್, ರವೀಂದ್ರ, ಶಿವಕುಮಾರ್, ಎಸ್.ಎಚ್. ರುದ್ರಪ್ಪ, ಕುಮಾರಪ್ಪ, ವಿನಾಯಕ ಮೊದಲಾದವರು ತಿಳಿಸಿದ್ದಾರೆ.