ಭ್ರಷ್ಟಾಚಾರ ವಿಚಾರದಲ್ಲಿ ಬಹಳ ಕಠಿಣವಾಗಿದ್ದ ರೋಹಿಣಿ ಅವರ ವರ್ಗಾವಣೆ ಒಬ್ಬ ಮಂತ್ರಿಯ ಒತ್ತಡದಿಂದಾಗಿ ನಡೆದಿದೆ. ‘ಮಹಾಮಸ್ತಕಾಭಿಷೇಕ ಕಾರ್ಯ ಆಗಬೇಕು. ಈಗ ಅವರನ್ನು ವರ್ಗಾಯಿಸಬೇಡಿ ಎಂದು ಮುಖ್ಯಕಾರ್ಯದರ್ಶಿ ಅವರಿಗೆ ಮನವಿ ಮಾಡಿದ್ದೆ. ಆದರೆ, ರಾತ್ರೋ ರಾತ್ರಿ ವರ್ಗಾವಣೆ ಆದೇಶ ಹೊರಬಿದ್ದಿದೆ. ಮುಖ್ಯಕಾರ್ಯದರ್ಶಿ ಅವರನ್ನ ಕೇಳಿದಾಗ ಇದರಲ್ಲಿ ನಮ್ಮ ಪಾತ್ರ ಇಲ್ಲ, ಸರ್ಕಾರ ನೇರವಾಗಿ ಆದೇಶಮಾಡಿ ವರ್ಗ ಮಾಡಿದೆ’ ಎಂದರು.