‘ಶುದ್ಧೀಕರಣ ಪ್ರಕ್ರಿಯೆ: ಅಸಂಗತ ಪ್ರಹಸನ’ ಸಂಪಾದಕೀಯ (ಪ್ರ.ವಾ., ಜ. 17) ಓದಿ ತುಂಬ ಸಂತೋಷವಾಯ್ತು. ಇದು ನಮ್ಮ ಮೆಚ್ಚಿನ ‘ಪ್ರಜಾವಾಣಿ’ಯ ಹೆಗ್ಗಳಿಕೆ, ಹೆಗ್ಗುರುತು. ಕನ್ನಡದಲ್ಲಿ ಈ ರೀತಿಯ ಆರೋಗ್ಯಕರ ಚಿಂತನೆ ಹೊಂದಿದ ಮತ್ತೊಂದು ದೈನಿಕ ಇಲ್ಲವೇ ಇಲ್ಲ. ಆ ಕಾರಣಕ್ಕಾಗಿಯೇ ನಮಗೆ ‘ಪ್ರಜಾವಾಣಿ’ಯ ಬಗ್ಗೆ ಅಭಿಮಾನ, ಗೌರವ.