ಎಫ್ಕೆಸಿಸಿಐನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು, ‘ನನ್ನ ಅವಧಿಯಲ್ಲಿ ಬೆಂಗಳೂರು ಮೆಟ್ರೊ ಸೇರಿದಂತೆ ಅನೇಕ ಯೋಜನೆಗಳಿಗೆ ಒಪ್ಪಿಗೆ ಸೂಚಿಸಿದ್ದೆ. ಆದರೆ, ನನ್ನ ಫೋಟೋವನ್ನು ದೊಡ್ಡದಾಗಿ ಹಾಕಿಸಿಕೊಂಡು ಪ್ರಚಾರ ಪಡೆಯಲಿಲ್ಲ. ಸರ್ಕಾರಿ ಹಣವನ್ನು ಜಾಹೀರಾತಿಗೆ ನಾನು ಖರ್ಚು ಮಾಡಿಲ್ಲ. ಅದೇ ದುಡ್ಡನ್ನು ಅಭಿವೃದ್ಧಿ ಕೆಲಸಕ್ಕೆ ಬಳಸಿದ್ದೆ. ಈಗಿನ ಸರ್ಕಾರ ಜಾಹೀರಾತಿಗೆ ಬೊಕ್ಕಸದ ಹಣ ಬಳಸುತ್ತಿದೆ’ ಎಂದು ಹೇಳಿದರು.