ನಾಲ್ಕೂವರೆ ವರ್ಷಗಳಲ್ಲಿ ಸುದೀರ್ಘ ಕೆಲಸ ಮಾಡಿದವರು ಉಮೇಶ್ ಎಚ್.ಕುಸುಗಲ್. ಇವರು 2014 ರ ಜನವರಿಯಿಂದ 2016 ರ ಜುಲೈವರೆಗೆ ಕಾರ್ಯ ನಿರ್ವಹಿಸಿದ್ದರು. ಆ ಬಳಿಕ ಕೆ.ಪಿ.ಮೋಹನ್ ರಾಜ್, ವಿ. ಅನ್ಬುಕುಮಾರ್ ಮತ್ತು ವಿ. ಚೈತ್ರ ಒಂದು ವರ್ಷದ ಅವಧಿಯಲ್ಲಿ ಜಿಲ್ಲಾಧಿಕಾರಿಗಳಾಗಿ ಕೆಲಸ ಮಾಡಿದ್ದಾರೆ. ಅನ್ಬುಕುಮಾರ್ ವರ್ಗಾವಣೆ ಆದಾಗಲೂ ತೀವ್ರ ಟೀಕೆಗಳು ಕೇಳಿ ಬಂದಿದ್ದವು. ಈ ವರ್ಗಾವಣೆಯ ಹಿಂದೆ ರಾಜಕೀಯ ಇದೆ ಎಂದು ಹೊಳೆನರಸೀಪುರ ಶಾಸಕ ಎಚ್.ಡಿ.ರೇವಣ್ಣ ಆರೋಪಿಸಿದ್ದರು.