ಆಪರಾಧಿ ಸಲೀಂ (35), ನ್ಯಾಯಾಲಯದಿಂದ ಹೊರಬರುವ ಸಂದರ್ಭ ಪತ್ರಕರ್ತರು ಹಾಗೂ ವಕೀಲರು ಎದುರಾದರು. ರೊಚ್ಚಿಗೆದ್ದ ಆತ ನೆಲದಲ್ಲಿ ಬಿದ್ದಿದ್ದ ಇಟ್ಟಿಗೆಯನ್ನು ತೆಗೆದು ಪತ್ರಕರ್ತರ ಮೇಲೆ ಬೀಸಿದ. ಆವೇಶದಲ್ಲಿ ಪೊಲೀಸರ ರೈಫಲ್ ಕಸಿದುಕೊಂಡ. ಪೊಲೀಸರು ಎಚ್ಚೆತ್ತುಕೊಂಡು ರೈಫಲ್ ಅನ್ನು ವಶಕ್ಕೆ ಪಡೆದು, ಅಪರಾಧಿಯನ್ನು ಆಟೊದಲ್ಲಿ ಕರೆದೊಯ್ದರು. ಆಟೊ ಹತ್ತುವ ಮುನ್ನವೂ ಕಲ್ಲನ್ನು ಎತ್ತಿಕೊಂಡು ಬೀಸಿದ. ಕಲ್ಲು ನೆಲಕ್ಕೆ ಬಿದ್ದಿದ್ದು, ಯಾರಿಗೂ ಗಾಯವಾಗಲಿಲ್ಲ.