‘ಇವರೆಲ್ಲ (ತಮ್ಮ ಮೇಲೆ ಚಪ್ಪಲಿ ಎಸೆದಾತನ ಕುರಿತು) ಮಹಾತ್ಮ ಗಾಂಧಿ, ಗೋವಿಂದ ಪಾನ್ಸರೆ, ನರೇಂದ್ರ ದಾಭೋಲ್ಕರ್ ಕೊಂದವರ ಸಿದ್ಧಾಂತವನ್ನು ಅನುಸರಿಸುವವರು. ಕೆಲವರ ಅಣತಿ ಮೆರೆಗೆ ಇಂತಹ ಘಟನೆಗಳು ನಡೆಯುತ್ತವೆ. ಜತೆಗೆ, ಇವರು ‘ದ್ವೇಷ ಸಿದ್ಧಾಂತ’ವನ್ನು ಪಾಲಿಸುವವರು’ ಎಂದು ಹೇಳಿದರು. ‘ನಾನು ಸತ್ಯ ಮಾತನಾಡುವುದನ್ನು ಇಂತಹ ಕೃತ್ಯ ತಡೆಯಲಾರವು’ ಎಂದರು.