ಬೆಂಗಳೂರು: ಜನವರಿ 29ರಿಂದ ಕೆಟಿಪಿಪಿಎ ವತಿಯಿಂದ ಪುರುಷ ಮತ್ತು ಮಹಿಳೆಯರಿಗಾಗಿ ಎಮ್.ಪಿ ಪ್ರಕಾಶ್ ಸ್ಮಾರಕ ಟೆನಿಸ್ ಟೂರ್ನಿಯನ್ನು ಆಯೋಜಿಸಲಾಗಿದೆ.
ರಾಜಾಜಿನಗರದ ಟೆನಿಸ್ ಟೆಂಪಲ್ ಕೋರ್ಟ್ಸ್ನಲ್ಲಿ ಪಂದ್ಯಗಳು ನಡೆಯಲಿವೆ. ₹ 1 ಲಕ್ಷ ಬಹುಮಾನ ಮೊತ್ತವನ್ನು ಟೂರ್ನಿ ಒಳಗೊಂಡಿದೆ. ಅರ್ಹತಾ ಸುತ್ತಿನ ಪಂದ್ಯಗಳು ಜನವರಿ 26ರಂದು ಮಧ್ಯಾಹ್ನ 12ರಿಂದ 2ರವರೆಗೆ ನಡೆಯಲಿವೆ.
ಹೆಚ್ಚಿನ ಮಾಹಿತಿಗಾಗಿ ಅಕ್ಷಯ್ ಕಿಶೋರ್ (9008959789) ಅವರನ್ನು ಸಂಪರ್ಕಿಸಬಹುದು.