ಕೆರೆಯ ರಕ್ಷಣೆ ನಿಟ್ಟಿನಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿ ಹೈಕೋರ್ಟ್ ಹಾಗೂ ಹಸಿರು ಪೀಠಗಳಿಗೆ ಸಲ್ಲಿಸಲಾಗಿದೆ ಎಂದು ಸರ್ಕಾರದ ಪರ ವಕೀಲ ದೇವರಾಜ್ ಅಶೋಕ್ ತಿಳಿಸಿದಾಗ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಮೂರ್ತಿ ಸಾಳ್ವಿ, ಕೆರೆಯ ರಕ್ಷಣೆಗಾಗಿ ಬರೀ ಕ್ರಿಯಾ ಯೋಜನೆ ಸಿದ್ಧಪಡಿಸಿ, ನ್ಯಾಯಾಲಯಗಳಿಗೆ ಹೇಳಿಕೆ ನೀಡಿದರೆ ಸಾಲದು. ಬದಲಿಗೆ, ಸಮಸ್ಯೆ ನೀಗಿಸಲು ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ತಾಕೀತು ಮಾಡಿದರು.