ಟಿಂಬರ್ ಮಾಫಿಯಾ, ಶ್ರೀಗಂಧದ ಕಳ್ಳಸಾಗಣೆಯನ್ನು ಎಳೆಯನ್ನಾಗಿಟ್ಟುಕೊಂಡಿರುವ ‘ಚೂರಿಕಟ್ಟೆ’ ಸಿನಿಮಾವನ್ನು ರಾಘು ಶಿವಮೊಗ್ಗ ನಿರ್ದೇಶಿಸಿದ್ದಾರೆ. ಮಾರ್ನಿಂಗ್ ಸ್ಟಾರ್ ಪಿಕ್ಚರ್ಸ್ ಲಾಂಛನದಲ್ಲಿ ಎಸ್. ನಯಾಜುದ್ದೀನ್, ತುಳಸಿರಾಮುಡು ಹಣ ಹೂಡಿದ್ದಾರೆ. ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ, ವಾಸಕೀ ವೈಭವ್ ಸಂಗೀತ, ಜಯಂತ್ ಕಾಯ್ಕಿಣಿ, ಕೆ. ಕಲ್ಯಾಣ್, ಕವಿರಾಜ್, ಗೌಸ್ಪೀರ್, ಡಿ. ಸತ್ಯಪ್ರಕಾಶ್ ಸಾಹಿತ್ಯವಿದೆ. ಪ್ರವೀಣ್ ತೇಜ, ಪ್ರೇರಣಾ, ದತ್ತಣ್ಣ, ಅಚ್ಯುತ್ಕುಮಾರ್, ಶರತ್ ಲೋಹಿತಾಶ್ವ, ಬಾಲಾಜಿ, ಮನೋಹರ್, ಪ್ರಮೋದ್ ಶೆಟ್ಟಿ, ಕಿರಣ್ ನಾಯಕ್, ಮಂಜುನಾಥ್ ಹೆಗ್ಡೆ ಮುಂತಾದವರ ತಾರಾಬಳಗವಿದೆ.