ನವದೆಹಲಿ: ಸಾಧಕರಿಗೆ ಗೌರವಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬಡವರಿಗೆ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಿಸಿದೆ. ಜಾಗತಿಕಮಟ್ಟದಲ್ಲಿ ಉಚಿತ ಶಾಲೆಗಳು ಮತ್ತು ಜನಪ್ರಿಯ ಬುಡಕಟ್ಟು ಕಲೆಗಳನ್ನು ಸ್ಥಾಪಿಸಿದ ವ್ಯಕ್ತಿಗಳಿಗೆ ಈ ಗೌರವ ಸಂದಿದೆ.
ಮೂವರಿಗೆ ಪದ್ಮವಿಭೂಷಣ, ಒಂಬತ್ತು ಸಾಧಕರಿಗೆ ಪದ್ಮಭೂಷಣ, 73 ಪ್ರತಿಭೆಗಳಿಗೆ ಪದ್ಮಶ್ರೀ ಪ್ರಕಟಿಸಲಾಗಿದೆ. 2018ನೇ ಸಾಲಿಗೆ ಒಟ್ಟು 85 ಮಂದಿಗೆ ಗುರುವಾರ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
ಕರ್ನಾಟಕದ ಸೂಲಗಿತ್ತಿ ನರಸಮ್ಮ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.
ಎರಡು ಜೀವಗಳನ್ನು ಕಾಪಿಡುವ ಸೂಲಗಿತ್ತಿಯ ಕೆಲಸ. ಅಂದರೆ, ಆ ಜೀವಗಳಿಗೆ ಉಸಿರು ತುಂಬುವ ಮೂಲಕ ಮರುಜನ್ಮ ನೀಡುವುದೇ ಆಗಿರುವ ಆ ಕಾಯಕದಲ್ಲಿ ತೊಡಿಗದ್ದ ನರಸಮ್ಮಗೆ ಈ ಪುರಸ್ಕಾರ ಸಂದಿದೆ.
2013ರ ‘ವಯೋಶ್ರೇಷ್ಠ ಸಮ್ಮಾನ್’ ರಾಷ್ಟ್ರೀಯ ಪ್ರಶಸ್ತಿ ಪಡೆದ ಸೂಲಗಿತ್ತಿ ನರಸಮ್ಮ ಎಂಬ ಅಪ್ಪಟ ಗ್ರಾಮೀಣ ಪ್ರತಿಭೆ 1500ಕ್ಕೂ ಹೆಚ್ಚು ಹೆರಿಗೆ ಮಾಡಿಸಿ, ಜೀವಗಳಿಗೆ ಉಸಿರು ತುಂಬಿಸುವ ಕಾಯಕ ಮಾಡಿದ್ದಾರೆ.