ವಾಸ್ತುಶಿಲ್ಪದ ಅತ್ಯದ್ಭುತ ಕೊಡುಗೆ ಎನಿಸಿರುವ ಎಲ್ಲೋರಾದ ಕೈಲಾಸನಾಥ ದೇಗುಲ, ಕನ್ನಡಿಗರ ವ್ಯಕ್ತಿತ್ವವನ್ನು ವಿಶದವಾಗಿ ವರ್ಣಿಸಿದ, ಕನ್ನಡದ ಮೊದಲ ಉದ್ಗ್ರಂಥ- ಅಮೋಘವರ್ಷನ ‘ಕವಿರಾಜಮಾರ್ಗ’ ಮುಂತಾದ ಹಿರಿಮೆಯ ಗರಿಯನ್ನು ಕರ್ನಾಟಕದ ಮುಕುಟಕ್ಕೇರಿಸಿರುವ ರಾಷ್ಟ್ರಕೂಟ ರಾಜಮನೆತನವನ್ನು ಸ್ಮರಿಸುವುದು ಇಂದಿನ ಅಗತ್ಯ. ಇಂಥ ಉತ್ಸವಗಳು ಇತಿಹಾಸದ ಬಗ್ಗೆ ಅರಿವು ಮೂಡಿಸಲು ಉಪಯುಕ್ತವಾಗಿವೆ.