‘ನೀನಾಸಂ’ ಸಂಸ್ಥೆಗೆ ₹ 5 ಲಕ್ಷ ನಗದು, ಪ್ರಶಸ್ತಿ ಫಲಕ ನೀಡಲಾಗುತ್ತದೆ. ಮಂಡ್ಯ ಜಿಲ್ಲೆ ಮಳವಳ್ಳಿ ಬಳಿಯ ಕುಂದೂರು ಬೆಟ್ಟದಲ್ಲಿ ಪ್ರಾಣಿ–ಪಕ್ಷಿಗಳಿಗೆ ನೀರಿಗಾಗಿ 8 ಕೆರೆಗಳನ್ನು ತೋಡಿಸಿದ ಕುರಿಗಾಯಿ ಕಾಮೇಗೌಡ ಹಾಗೂ ಬರಗಾಲಕ್ಕೆ ಎದೆಯೊಡ್ಡಿ ಜಮೀನು, ಜಾನುವಾರು, ಅರಣ್ಯ, ಜನಸಮುದಾಯವನ್ನು ಕಾಪಾಡಿದ ಮಹಾರಾಷ್ಟ್ರದ ಉಸ್ಮಾನಾಬಾದ್ನ ಗೋದಾವರಿ ಡಾಂಗೆ ಅವರಿಗೆ ತಲಾ ₹ 3 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ಕೊಡಲಾಗುತ್ತದೆ ಎಂದು ರಮಾಬಾಯಿ ಚಾರಿಟಬಲ್ ಫೌಂಡೇಷನ್ ಟ್ರಸ್ಟಿಗಳಾದ ಎಂ.ಜಗನ್ನಾಥ ಶೆಣೈ, ಎಂ.ಗೋಪಿನಾಥ ಶೆಣೈ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.