‘ಇನ್ನು ಅಂತಿಮವಾಗಿಲ್ಲ, ಸುಮ್ಮನಿರಿ’ ಎಂದು ಪರಮೇಶ್ವರ್ ಸಮಾಧಾನಪಡಿಸಲು ಯತ್ನಿಸಿದರೂ ಕಾರ್ಯಕರ್ತರು ಸುಮ್ಮನಾಗಲಿಲ್ಲ. ಅಮರಾವತಿ ಅತಿಥಿ ಗೃಹದಲ್ಲಿ ಪರಮೇಶ್ವರ್ ಇರುವುದನ್ನು ತಿಳಿದ ಕಾರ್ಯಕರ್ತರು, ಅಲ್ಲಿಗೂ ಹೋಗಿ ಸಿಂಗ್ ವಿರುದ್ಧ ಧಿಕ್ಕಾರ ಕೂಗಿದರು. ಅತಿಥಿ ಗೃಹದೊಳಕ್ಕೆ ನುಗ್ಗಲು ಯತ್ನಿಸಿದಾಗ ಅವರನ್ನು ತಡೆಯಲು ಪೊಲೀಸರು ಹರಸಾಹಸಪಟ್ಟರು. ಪೊಲೀಸರು– ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.