‘ಹತ್ತಿಕುಣಿ ಹೋಬಳಿ ಕಟಗಿ ಶಹಾಪುರ ಗ್ರಾಮದ ದಲಿತರಿಗೆ ಸೇರಿದ ಹೊನಗೇರಾ ಸೀಮಾಂತದ ಸರ್ವೆ ನಂಬರ್ 171,172,173, 174 ರಲ್ಲಿ ಬರುವ 40 ಎಕರೆ ಭೂಮಿ ಮುಳುಗಡೆಯಾಗಿದೆ. ದಲಿತರಿಗೆ ಈ ಭೂಮಿ ಬಿಟ್ಟರೆ ಜೀವನಕ್ಕೆ ಗತಿ ಇಲ್ಲ. ಈ ಕುರಿತು ಜಿಲ್ಲಾಡಳಿತ, ತಾಲ್ಲೂಕು ಆಡಳಿತಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು.