ಮಕ್ಕಳಲ್ಲಿ ಹಸಿವಾಗದಿರುವುದು, ಹೊಟ್ಟೆನೋವು, ರಕ್ತಹೀನತೆ, ಪದೇ ಪದೇ ವಾಂತಿಬೇಧಿ ಮುಂತಾದ ಸಮಸ್ಯೆಗಳಿಗೆ ಜಂತುಹುಳುವಿನ ಕಾಟ ಪ್ರಮುಖ ಕಾರಣ. ಮಕ್ಕಳಲ್ಲಿ ಜಂತುಹುಳು ಬಾಧೆಗೆ ಅನೈರ್ಮಲ್ಯ ಮತ್ತು ಬಯಲು ಶೌಚ ಬಹುಮುಖ್ಯ ಕಾರಣ. ಬರಿಗಾಲಲ್ಲಿ ಮಲವನ್ನು ತುಳಿದು ನಡೆದಾಡುವ ಮಕ್ಕಳಿಗೆ ಜಂತುಹುಳುವಿನ ಬಾಧೆ ಕಾಡುತ್ತದೆ. ಹೀಗಾಗಿ ಬಯಲು ಬಹಿರ್ದೆಸೆ ಸಂಪೂರ್ಣ ನಿರ್ಮೂಲನೆಗೊಳಿಸುವುದು ಅಗತ್ಯ. ಮಕ್ಕಳಲ್ಲಿನ ರಕ್ತಹೀನತೆ ನಿವಾರಣೆ ನಿಟ್ಟಿನಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ ಫೆ. 12ರಂದು ಜಿಲ್ಲೆಯಲ್ಲಿ ನಡೆಯಲಿದೆ ಎಂದರು.