ಬೆಂಗಳೂರು: ಮಹದಾಯಿ ಉತ್ತರ ಕರ್ನಾಟಕದ ಸಮಸ್ಯೆ, ದಕ್ಷಿಣದವರು ಪ್ರತಿಭಟಿಸುವ ಅಗತ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರು ಹೇಳಿದ್ದು ಚರ್ಚೆಗಾಸ್ಪದವಾಗಿದ್ದು, ಸಾಮಾಜಿಕ ತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿತ್ತು.
ಆದರೆ ತಾನು ಆ ರೀತಿ ಹೇಳಿಲ್ಲ ಎಂದ ಸದಾನಂದ ಗೌಡರು " ಮಹದಾಯಿ ಉತ್ತರ ಕರ್ನಾಟಕದ ಗಂಭೀರ ಸಮಸ್ಯೆ "ಎಲ್ಲರೂ ಒಟ್ಟಾಗಿ ಸೇರಿ ಬಗೆಹರಿಸುವ ಅಗತ್ಯವಿದೆ ಎಂಬ ನನ್ನ ಹೇಳಿಕೆಯನ್ನು ತಿರುಚಲಾಗಿದೆ , ಸುಳ್ಳು ಹಬ್ಬಿಸಿ ಜನರನ್ನು ಗೊಂದಲಕ್ಕೆ ತಳ್ಳುವ ಕಿಡಿಗೇಡಿಗಳಿಗೆ ಇದೊಂದು ಉದ್ಯೋಗವಾಗಿ ಬಿಟ್ಟಿದೆ ಎಂದು ಟ್ವೀಟಿಸಿದ್ದಾರೆ.
" ಮಹದಾಯಿ ಉತ್ತರ ಕರ್ನಾಟಕದ ಗಂಭೀರ ಸಮಸ್ಯೆ "ಎಲ್ಲರೂ ಒಟ್ಟಾಗಿ ಸೇರಿ ಬಗೆಹರಿಸುವ ಅಗತ್ಯವಿದೆ ಎಂಬ ನನ್ನ ಹೇಳಿಕೆಯನ್ನು ತಿರುಚಲಾಗಿದೆ , ಸುಳ್ಳು ಹಬ್ಬಿಸಿ ಜನರನ್ನು ಗೊಂದಲಕ್ಕೆ ತಳ್ಳುವ ಕಿಡಿ ಗೇಡಿ ಗಳಿಗೆ ಇದೊಂದು ಉದ್ಯೋಗವಾಗಿ ಬಿಟ್ಟಿದೆ pic.twitter.com/FWi55HujNa