ಜಯಂ ರವಿ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಆಕಾಶದಿಂದ ಬೆಂಕಿಯ ಚೆಂಡೊಂದು ಭೂಮಿಗೆ ಬಂದು ಬೀಳುತ್ತದೆ. ಇದೊಂದು ದಾಳಿಯೇ ಎಂದು ಪರಿಗಣಿಸಿ ಮುಂದೆ ಆಗುವ ಅನಾಹುತವನ್ನು ತಡೆಯಲು ತಂಡವೊಂದು ಬಾಹ್ಯಾಕಾಶದತ್ತ ಪ್ರಯಾಣ ಬೆಳೆಸುತ್ತದೆ. ಅಲ್ಲಿಯೂ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗುತ್ತದೆ. ನಾಯಕನಿಗೆ ಏನಾಗುತ್ತದೆ ಎನ್ನುವ ಕುತೂಹಲ ಉಳಿಸಿ ಟ್ರೇಲರ್ ಮುಗಿಯುತ್ತದೆ. ಪದ್ಮಾವತಿ ಚಡಲವಡಾ ಚಿತ್ರ ನಿರ್ಮಾಣ ಮಾಡಲಿದ್ದಾರೆ. ನಿವೇದಿತಾ ಪೇತುರಾಜ್ ಚಿತ್ರದಲ್ಲಿದ್ದಾರೆ. ಚಿತ್ರದ ಬಿಡುಗಡೆಯ ದಿನಾಂಕ ಜನವರಿ 26.