ಹುಬ್ಬಳ್ಳಿ: ಇಲ್ಲಿನ ಗದಗ ರಸ್ತೆಯ ಹೆದ್ದಾರಿಯ ಬಳಿ ಫಾರ್ಮ್ ಹೌಸ್ ಮಾಲೀಕ ಮಹೇಶ ಬ್ಯಾಹಟ್ಟಿ ಅವರನ್ನು ದುಷ್ಕರ್ಮಿಗಳು ಚಾಕು ಹಾಗೂ ತಲ್ವಾರ್ನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.
ನಗರದ ದಿವಟೆ ಓಣಿ ನಿವಾಸಿ ಮಹೇಶ ಬ್ಯಾಹಟ್ಟಿ ಕೊಲೆಯಾದವರು. ಸ್ಥಳಕ್ಕೆ ಕೇಶ್ವಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಿನ್ನೆಯಷ್ಟೇ ನಗರದ ರಾಮನಗರ ಕಾಂಗ್ರೆಸ್ ಮುಖಂಡ ಕುಮಾರೇಶ್ವರ ಪಿಳ್ಳೈ ಎಂಬುವವರನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು.