ಪದ್ಮಿನಿಯ ವ್ಯಕ್ತಿತ್ವಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿರುವವರು, ಇಂದಿನ ಮಹಿಳೆಯ (ದೀಪಿಕಾ ಪಡುಕೋಣೆ) ಬಗ್ಗೆ ಹಗುರವಾಗಿ ಮಾತನಾಡುವುದು, ಜೀವ ಬೆದರಿಕೆ ಹಾಕುವುದು ಎಷ್ಟು ಸರಿ? ‘ಚಿತ್ರ ಬಿಡುಗಡೆಯಾದರೆ ಭಾರತವೇ ಹೊತ್ತಿ ಉರಿಯಲಿದೆ’ ಎಂದು ಬೆದರಿಕೆ ಹಾಕುವವರಿಗೆ, ನಮ್ಮ ದೇಶದ ಇತಿಹಾಸದ ಬಗ್ಗೆ ಎಷ್ಟು ಅಭಿಮಾನವಿದೆ ಎಂಬುದು ಸ್ಪಷ್ಟವಾಗುತ್ತದೆ.