‘ಸದ್ಯ ಶ್ರೀಗಳಿಗೆ ನ್ಯುಮೋನಿಯಾ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆಗಳಿದ್ದು, ಅದಕ್ಕೆ ಚಿಕಿತ್ಸೆ ನೀಡುತ್ತಿದ್ದೇವೆ. ಡ್ರಿಪ್ಸ್ ಮೂಲಕ ಔಷಧಿ ನೀಡುತ್ತಿದ್ದೇವೆ. ರಾತ್ರಿ ಆಹಾರ ಸೇವನೆಗೆ ಅವಕಾಶ ನೀಡಲಾಗುತ್ತದೆ. ಬೆಳಿಗ್ಗೆವರೆಗೂ ಅವರ ಆರೋಗ್ಯದ ಬಗ್ಗೆ ವಿಶೇಷ ನಿಗಾ ವಹಿಸುತ್ತೇವೆ. ಸಂಪೂರ್ಣ ಚೇತರಿಸಿಕೊಂಡರೆ, ಶನಿವಾರ ಮಧ್ಯಾಹ್ನ ಮಠಕ್ಕೆ ಕಳುಹಿಸುತ್ತೇವೆ’ ಎಂದರು.