ಸಿದ್ಧೇಶ್ವರ ಸ್ವಾಮೀಜಿ ಪ್ರವಚನ ಕಲಬುರ್ಗಿಯಲ್ಲಿ ನಡೆಯುತ್ತಿದೆ. ಅವರು ಅಲ್ಲೇ ವಾಸ್ತವ್ಯ ಮಾಡಿದ್ದು, ವಾಯುವಿಹಾರ, ಪ್ರವಚನ, ಪತ್ರಿಕೆ ಓದು ಪೂರೈಸಿದ ಬಳಿಕ ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ಅವರನ್ನು ತಮ್ಮಲ್ಲಿಗೆ ಕರೆಸಿಕೊಂಡು ಒಬ್ಬರೇ ಮಾತುಕತೆ ನಡೆಸಿದರು. ಬಳಿಕ ಪತ್ರವನ್ನು ಕೊಟ್ಟು ಪ್ರಧಾನಿಗೆ ತಲುಪಿಸಿ ಎಂದು ಹೇಳಿ ಕಳುಹಿಸಿದರು ಎಂದು ಗೊತ್ತಾಗಿದೆ.