ಬೆಂಗಳೂರು: ಕೆ.ಪಿ. ಅಗ್ರಹಾರದ ರಾಮದಾಸ್ ಲೇಔಟ್ನಲ್ಲಿ ಕಟ್ಟಡದ ಮೇಲಿನಿಂದ ಬಿದ್ದು ಯುವಕನೊಬ್ಬ ಶುಕ್ರವಾರ ಮೃತಪಟ್ಟಿದ್ದಾನೆ.
‘ಮೃತ ಯುವಕ, ವಸ್ತುಗಳ ಖರೀದಿಗೆಂದು ಅಂಗಡಿಗೆ ಹೋಗಿದ್ದ. ಈ ವೇಳೆ ಆಯತಪ್ಪಿ ನಿರ್ಮಾಣ ಹಂತದ ಕಾಲುವೆಗೆ ಬಿದ್ದಿದ್ದಾನೆ’ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ಕೆ.ಪಿ. ಅಗ್ರಹಾರ ಪೊಲೀಸರು ತಿಳಿಸಿದರು.
ಮೃತನ ಸಂಬಂಧಿಕರ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ, ಯಾರೂ ದೂರು ಕೊಟ್ಟಿಲ್ಲ ಎಂದರು.