‘ಮಾವು–ಬೇವು’ ಕೃತಿಯಿಂದ ಅವರ ಸಾಹಿತ್ಯ ಆರಂಭವಾಯಿತು. 'ಕುವೆಂಪು ಮತ್ತು ಬೇಂದ್ರೆ ಹಾಗೂ ಕನ್ನಡದಲ್ಲಿ ರಮ್ಯವಾದ', 'ಪ್ರೀತಿ ಪ್ರಗಾಥ', 'ಕಣ್ಣು ನಾಲಗೆ ಕಡಲು', 'ಕುದಿಯುವ ಕುಲುಮೆ' ಹಾಗೂ 'ಪ್ರವಾಸಿ ಪದ್ಯಗಳು' ಸೇರಿದಂತೆ ಹಲವು ಕೃತಿಗಳನ್ನು ಬರೆದಿದ್ದಾರೆ. ಚಿತ್ರಸಾಹಿತ್ಯ ಕ್ಷೇತ್ರದಲ್ಲಿಯೂ ಗೌಡರು ಪ್ರಸಿದ್ಧರಾದವರು ‘ಆಲೆಮನೆ’, ‘ಅರುಣರಾಗ’, ‘ಪರಸಂಗದ ಗೆಂಡೆ ತಿಮ್ಮ’, ‘ಪಡುವಾರಳ್ಳಿ ಪಾಂಡವರು’ ಹೀಗೆ ಹಲವು ಚಿತ್ರಗಳಿಗೆ ಸಾಹಿತ್ಯವನ್ನು ನೀಡಿದ್ದಾರೆ. ಅವರ ಚಿತ್ರ ಸಾಹಿತ್ಯದಲ್ಲಿ ನೆಲದ ಸೊಗಡು ಎದ್ದು ಕಾಣುತ್ತದೆ.