ನಗರದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಸಿಪಿಐ ಪಕ್ಷದ 23ನೇ ರಾಜ್ಯ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ‘ಬಿಜೆಪಿ, ಕೆಲವು ಮಾಧ್ಯಮ ಹಾಗೂ ಉದ್ಯಮಿಗಳನ್ನು ಬಳಸಿಕೊಂಡು ಮೋದಿ, ಷಾ ಇರುವುದೇ ಗೆಲ್ಲುವುದಕ್ಕೆ; ಇವರಿಂದಲೇ ಭವ್ಯ ಭಾರತ ಎಂಬ ಸುಳ್ಳುಗಳನ್ನು ಸೃಷ್ಟಿಸುತ್ತಿದೆ. ಆದರೆ, ನಿಜವಾದ ಅರ್ಥದಲ್ಲಿ ಬಿಜೆಪಿ ಗುಜರಾತಿನಲ್ಲಿ ಗೆದ್ದಿಲ್ಲ. ಪಂಜಾಬ್, ಬಿಹಾರಗಳಲ್ಲೂ ಗೆದ್ದಿಲ್ಲ. ಈಗ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಭಿವೃದ್ಧಿ ಕೆಲಸಗಳು ಆಗಿಲ್ಲ. ದಲಿತರು, ಅಲ್ಪಸಂಖ್ಯಾತರು ನೆಮ್ಮದಿಯಿಂದ ಇಲ್ಲ’ ಎಂದು ವಾಗ್ದಾಳಿ ನಡೆಸಿದರು.