ಸಭೆ 10.30ಕ್ಕೆ ನಿಗದಿಯಾಗಿತ್ತು. ಆಗ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ನಾಗಮೋಹನ ದಾಸ್ ಇನ್ನೂ ಸಭೆಗೆ ಬಂದಿರಲಿಲ್ಲ. 10.40ರ ವೇಳೆಗೆ ಗಂಗಾಧರ ಗುರುಮಠ ಮತ್ತು ಅವರ ಕಡೆಯ ಮೂರ್ನಾಲ್ಕು ಜನ ಸಮಿತಿ ಸಭೆ ನಡೆಯುತ್ತಿದ್ದ ಕೊಠಡಿಯೊಳಗೆ ಪ್ರವೇಶಿಸಿದರು. ಇದಕ್ಕೆ ಸಭೆಯಲ್ಲಿ ಅನಿಸ್ ಸಿರಾಜ್ ಆಕ್ಷೇಪಿಸಿದರು. ಇದರಿಂದ ವಾತಾವರಣ ಕಾವೇರಿತು ಎನ್ನಲಾಗಿದೆ.