ಪಟ್ಟಣ ಮಹಾಮಾಯ ದೇವಸ್ಥಾನದಿಂದ ಡೊಳ್ಳು, ನಗಾರಿ, ವಿವಿಧ ಮೇಳದೊಂದಿಗೆ ಮೆರವಣಿಗೆ ನಡೆಸಲಾಯಿತು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಾಂತಲಾ ರಾಮಣ್ಣ ಬಂಕದಮನಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಶೆಟ್ಟಿ, ಉಪವಿಭಾಗಾಧಿಕಾರಿ ರವಿ. ಎಂ ತಿರ್ಲಾಪೂರ, ತಹಶೀಲ್ದಾರ್ ರಮೇಶ ಅಳವುಂಡಿಕರ್, ಪಿಎಸ್ಐ ಜಿ.ಎಸ್ ರಾಘವೇಂದ್ರ, ಸಾಹಿತಿ ಕೆ.ಬಿ ಬ್ಯಾಳಿ ಇದ್ದರು.