‘ಅಂಬಿಗರ ಚೌಡಯ್ಯನವರು ಡಾಂಬಿಕತೆ, ವೈದಿಕತೆಯ ವಿರೋಧಿಗಳು. ಅವರು ಅನುಸರಿಸಿದ ಶರಣ ಧರ್ಮವು ಅತ್ಯಂತ ಕನಿಷ್ಠ ವ್ಯಕ್ತಿಯೂ ಆಚರಿಸುವಷ್ಟು ಸರಳ ಮತ್ತು ಶ್ರೇಷ್ಠವಾಗಿದೆ. ಹೀಗಾಗಿ, ಜಿಲ್ಲೆಯ ಚೌಡಯ್ಯದಾನಪುರದಲ್ಲಿನ ಅವರ ಐಕ್ಯಮಂಟಪದಲ್ಲಿ ಕೂಡಲ ಸಂಗಮದ ಮಾದರಿಯಂತೆ ಸಹಜ ಆರಾಧನೆ, ವಚನ ಪಠಣಗಳು ನಡೆಯಬೇಕು. ಹೋಮ ಹವನ, ಕುಂಕುಮಾರ್ಚನೆ, ಮಂಗಳಾರತಿ, ಪೂಜೆಗಳು ನಡೆಯಬಾರದು’ ಎಂದು ಒತ್ತಾಯಿಸಿದರು.