ಅಲ್ಪಸಂಖ್ಯಾತರ ವಿರುದ್ಧದ ಮೊಕದ್ದಮೆಗಳನ್ನು ವಾಪಸ್ ಪಡೆಯುವ ಸರ್ಕಾರದ ಕ್ರಮಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿತು. ಇದರಿಂದ ಕಂಗಾಲಾದ ಸರ್ಕಾರ, ‘ಅಮಾಯಕ ಮುಸ್ಲಿಮರ ವಿರುದ್ಧದ ಪ್ರಕರಣಗಳು’ ಎಂಬ ಶಬ್ದಗಳ ಬದಲಿಗೆ ‘ಎಲ್ಲ ಅಮಾಯಕರ ವಿರುದ್ಧದ ಪ್ರಕರಣಗಳು’ ಎಂಬುದಾಗಿ ಸುತ್ತೋಲೆಯನ್ನು ಬದಲಾಯಿಸಿದೆ ಎಂದು ಅವರು ದೂರಿದರು.