ಬಂಗಾರಪ್ಪನವರು ತಮ್ಮ ಮೇಲೆ ದಾಖಲಾಗಿದ್ದ ಮೂರೂ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದರು. ಆದರೂ ಅವರನ್ನು ಭ್ರಷ್ಟಾಚಾರಿ ಎಂದು ಹೇಳಿರುವುದು ನ್ಯಾಯಾಂಗ ನಿಂದನೆಯಾಗಿದೆ. ಪೂಜಾರಿ ಒಬ್ಬ ಹಿರಿಯ ರಾಜಕಾರಣಿಯಾಗಿ ಇನ್ನೊಬ್ಬ ನಾಯಕನ ಕುರಿತು ಬರೆಯುವಾಗ ಸತ್ಯಾಂಶ ಇರಬೇಕು. ಆತ್ಮಚರಿತ್ರೆಯನ್ನು ಪೂಜಾರಿ ತಮ್ಮ ತಲೆ ಮೇಲೆ ಹೊತ್ತುಕೊಂಡು ದೇವಸ್ಥಾನ ಸುತ್ತಿದ್ದಾರೆ. ಪುಸ್ತಕ ಮಾರಾಟವಾಗಲೆಂದೋ ಅಥವಾ ಜನರನ್ನು ದಾರಿ ತಪ್ಪಿಸಲೆಂದೋ ಈ ತಂತ್ರ ಹೂಡಿರಬೇಕು ಎಂದು ವ್ಯಂಗ್ಯವಾಡಿದರು.