ಲಕ್ಷ್ಮೀನಾರಾಯಣ್ಗೆ ಯಲಹಂಕದ ಕುಸುಮಾ ಅವರೊಂದಿಗೆ ವಿವಾಹ ನಿಶ್ಚಯವಾಗಿತ್ತು. ಬೀಗರೊಂದಿಗೆ ಸಮಾಲೋಚನೆ ನಡೆಸಿ ಗಿರಿಜಾ ಕಲ್ಯಾಣದ ಮಾದರಿಯಲ್ಲಿ ವಿವಾಹ ನಡೆಸಲು ಮಾತುಕತೆ ನಡೆಸಿದ್ದರು. ಜನರು ಮದುವೆಗೆ ಬಂದಾಗ ಅದು ಮದುವೆ ಮಂಟಪವೋ ಅಥವಾ ಪೌರಾಣಿಕ ನಾಟಕವೋ ಎಂಬ ಅನುಮಾನ ಬಂದಿತ್ತು.ಮದುಮಗಳ ತಂದೆ ತಾಯಿ ಹಾಗೂ ಸಂಬಂಧಿಕರು ಬ್ರಹ್ಮ, ಸರಸ್ವತಿ, ಗಣಪತಿ, ಸುಬ್ರಹ್ಮಣ್ಯ ಹಾಗೂ ಸಪ್ತ ಋಷಿಗಳಂತೆ ಸಿಂಗರಿಸಿಕೊಂಡು ಮದುವೆಯ ಕಲ್ಯಾಣ ಮಂಟಪಕ್ಕೆ ಬಂದರು. ಬಂಧುಗಳು ಈ ಮದುವೆ ಕಂಡು ಸಂತಸ ಪಟ್ಟರು. ಕೈಲಾಸವೇ ಧರೆಗಿಳಿದಂತೆ ಕಲ್ಯಾಣ ಮಂಟಪದಲ್ಲಿ ಋಷಿಗಳು, ನಂದಿ ವೇಷಧಾರಿಗಳಿದ್ದರು. ಹಿರಿಯ ಮಹಿಳೆಯರೂ ಪೌರಾಣಿಕ ಉಡುಗೆ ತೊಡುಗೆಗಳಲ್ಲಿ ಕಂಡುಬಂದರು.