ಬಾದಾಮಿ: ಇಲ್ಲಿನ ಮ್ಯೂಸಿಯಂ ಬಳಿ ಒಳಚರಂಡಿ ಕಾಮಗಾರಿಗೆ ತೆಗೆದ ಭೂ ಅಗೆತದಲ್ಲಿ ಲಭ್ಯವಾದ ಶಿಲಾವಶೇಷಗಳು ಚಾಲುಕ್ಯ, ಕಲ್ಯಾಣಿ ಚಾಲುಕ್ಯ ಮತ್ತು ವಿಜಯನಗರ ಸಾಮ್ರಾಜ್ಯ ಕಾಲದ ಅವಶೇಷಗಳು ಎಂದು ಇತಿಹಾಸ ಸಂಶೋಧಕ ಡಾ. ಎಸ್.ಐ.ಪತ್ತಾರ ಹೇಳಿದರು. ‘ಪ್ರಜಾವಾಣಿ’ಯಲ್ಲಿ ಭಾನುವಾರ ಶಿಲಾವಶೇಷಗಳ ಪತ್ತೆ ಕುರಿತು ಸುದ್ದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಅವರು ಪರಿಶೀಲಿಸಿದರು.