‘ಬಿಸಿಸಿಐ ಸದ್ಯದಲ್ಲೇ ಅಂಧ ಕ್ರಿಕೆಟಿಗರನ್ನು ಗುರುತಿಸುವ ನಿರೀಕ್ಷೆ ಇದೆ. ಆಡಳಿತಾಧಿಕಾರಿಗಳ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಈ ಕುರಿತು ಸಂದೇಶ ಕಳಿಸಿದ್ದಾರೆ. ಕ್ರೀಡಾ ಸಚಿವಾಲಯ ಮತ್ತು ರಾಜ್ಯ ಸರ್ಕಾರ ಕೂಡ ಆಟಗಾರರ ನೆರವಿಗೆ ಬರುವ ಭರವಸೆ ಇದೆ’ ಎಂದು ವಿಶ್ವ ಅಂಧರ ಕ್ರಿಕೆಟ್ ಸಮಿತಿಯ ಅಧ್ಯಕ್ಷ ಜಿ.ಕೆ ಮಹಾಂತೇಶ್ ತಿಳಿಸಿದರು. ಹಿರಿಯ ಕ್ರಿಕೆಟಿಗ ಸೈಯದ್ ಕಿರ್ಮಾನಿ, ವಿಶ್ವಕಪ್ನಲ್ಲಿ ಆಡಿದ್ದ ಬಸಪ್ಪ ಹಾಗೂ ಸುನಿಲ್ ರಮೇಶ್ ಇದ್ದರು.