ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಮಧುಕರ ಭಾಗವತ, ಮುಂದಿನ ವಿಚಾರಣೆಯನ್ನು ಫೆ. 1ಕ್ಕೆ ನಿಗದಿಪಡಿಸಿದ್ದಾರೆ. ಅಂದು ನ್ಯಾಯಾಲಯದಲ್ಲಿ ತಮ್ಮ ಪ್ರಮಾಣೀಕೃತ ಹೇಳಿಕೆ ದಾಖಲಿಸುವಂತೆ, ಅರ್ಜಿದಾರ ಚಂದ್ರಶೇಖರ ಹೆಗಡೆ ಅವರಿಗೆ ಸೂಚಿಸಿದ್ದಾರೆ.
‘ದಿವಾಕರ ಶಾಸ್ತ್ರಿ, ಪ್ರೇಮಲತಾ ದಿವಾಕರ್, ಸಿ.ಎಂ.ಎನ್.ಶಾಸ್ತ್ರಿ ಎಂಬುವವರು, ಹಣಕ್ಕಾಗಿ ಒತ್ತಾಯಿಸಿ ರಾಘವೇಶ್ವರ ಸ್ವಾಮೀಜಿ ವಿರುದ್ಧ ಬ್ಲಾಕ್ಮೇಲ್ ತಂತ್ರ ನಡೆಸಿದ್ದಾರೆ’ ಎಂದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಚಂದ್ರಶೇಖರ ದೂರು ದಾಖಲಿಸಿದ್ದರು.