ಚಿಕ್ಕಮಗಳೂರು: ಬಿಜೆಪಿ ಶಾಸಕ ಸಿ.ಟಿ.ರವಿ ಅವರಿಗೆ ಪತ್ರದ ಮೂಲಕ ಕೊಲೆ ಬೆದರಿಕೆ ಹಾಕಲಾಗಿದೆ.
ಈ ಕುರಿತು 'ಪ್ರಜಾವಾಣಿ'ಯೊಂದಿಗೆ ಮಾತನಾಡಿದ ರವಿ ಅವರು, ‘ಅಂಚೆ ಮೂಲಕ ಪತ್ರವೊಂದು ಬಂದಿದೆ. ಅದರಲ್ಲಿ ಕೊಲೆ ಬೆದರಿಕೆ ಹಾಕಿದ್ದಾರೆ. ಬಿಜೆಪಿ, ವಿಶ್ವ ಹಿಂದು ಪರಿಷತ್ ಬಗ್ಗೆ ಅವಹೇಳನ ಮಾಡಿ ಬರೆದಿದ್ದಾರೆ’ ಎಂದು ತಿಳಿಸಿದ್ದಾರೆ.
ಪತ್ರದಲ್ಲಿ ‘ಅಲೆ ಹದೀಶ್ ಗ್ರೂಪ್ ಆಫ್ ಕರ್ನಾಟಕ’ ಎಂಬ ಹೆಸರು ಇದೆ. ಪತ್ರದಲ್ಲಿ ಬೆಂಗಳೂರು ಅಂಚೆ ಮೊಹರು ಇದೆ. ಬೆದರಿಕೆ ಪತ್ರ ಬಂದಿರುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡುತ್ತೇನೆ' ಎಂದರು.