ಮೈಸೂರು: ‘ಕರ್ನಾಟಕ ರಾಜ್ಯ ಮುಕ್ತ ವಿ.ವಿ.ಗೆ ಮಾನ್ಯತೆ ನೀಡುವಂತೆ ಭಿಕ್ಷೆ ಬೇಡಿ ಸಾಕಾಯ್ತು. ನಿಮ್ಮ ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ?’
ಹೀಗೆ, ಕೆಎಸ್ಒಯು ವಿದ್ಯಾರ್ಥಿಗಳು ಟ್ವಿಟರ್ನಲ್ಲಿ ಪ್ರಧಾನಿ ಮೋದಿಗೆ ಟ್ವೀಟ್ ಮಾಡಿದ್ದಾರೆ. ‘ಬಿಜೆಪಿಯ ಅಮಿತ್ ಷಾ, ಪ್ರಕಾಶ್ ಜಾವಡೇಕರ್, ಬಿ.ಎಸ್.ಯಡಿಯೂರಪ್ಪ, ಪ್ರತಾಪ ಸಿಂಹ, ಅನಂತಕುಮಾರ್ ಅವರಿಗೆ ಮನವಿ ಮಾಡಿ ಸಾಕಾಗಿದೆ. ಇವರೆಲ್ಲರೂ ಕೆಲಸಕ್ಕೆ ಬಾರದವರು’ ಎಂದು ವಿದ್ಯಾರ್ಥಿಗಳು ಪ್ರಧಾನಮಂತ್ರಿ ಕಚೇರಿ (PMO India) ಖಾತೆಗೆ ಪ್ರಹಾರ ನಡೆಸಿದ್ದಾರೆ.