ಹುಕ್ಕೇರಿ: ತಾಲ್ಲೂಕಿನ ಹುಲ್ಲೋಳಿಹಟ್ಟಿಯ ಕುರುಬನಕೋಡಿಯಲ್ಲಿ ಬೇರೆ ಗ್ರಾಮದವರು ನಿರ್ಮಿಸುತ್ತಿರುವ ತೆರೆದಬಾವಿ ಮುಚ್ಚಿಸಬೇಕು ಎಂದು ಆಗ್ರಹಿಸಿ ರೈತರು ಭಾನುವಾರ ಪ್ರತಿಭಟನೆ ನಡೆಸಿದರು.
‘ಹುಲ್ಲೋಳಿ ಹಟ್ಟಿಯಲ್ಲಿ ಮೊದಲಿನಿಂದಲೂ ಕುಡಿಯುವ ನೀರಿಗೆ ಪರದಾಡುತ್ತಿದ್ದೇವೆ. ನೀರಾವರಿ ಸೌಲಭ್ಯ ಕಲ್ಪಿಸಲು ಸಣ್ಣ ನೀರಾವರಿ ಇಲಾಖೆಯು ₹ 2 ಕೋಟಿ ವೆಚ್ಚದಲ್ಲಿ ಕೆರೆ ನಿರ್ಮಾಣಕ್ಕೆ ಮಂಜೂರಾತಿ ನೀಡಿದೆ. ಕೆಲವರು ಕೆರೆ ಪಕ್ಕದಲ್ಲಿ ಬಾವಿ ತೋಡಿ ಪೈಪ್ಲೈನ್ ಅಳವಡಿಸಲು ಮುಂದಾಗಿದ್ದಾರೆ. ಇದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು’ ಎಂದು ರೈತರು ತಿಳಿಸಿದರು.