‘ಈಗಿರುವ ಮೂಲ ಸ್ಮಾರಕವನ್ನು ಯಥಾ ಸ್ಥಿತಿ ಕಾಪಾಡಿಕೊಂಡು, ಕಾಂಕ್ರೀಟ್ ಚಾವಣಿ ತೆಗೆದು, ಎತ್ತರದ ಚಾವಣಿ ನಿರ್ಮಿಸಬೇಕು. ಸ್ಮಾರಕದ ಪೂರ್ವ ಭಾಗದಲ್ಲಿರುವ ಸ್ವಾತಂತ್ರ್ಯ ಭವನವಿರುವ ಜಾಗದಲ್ಲಿ ಉದ್ಯಾನ ನಿರ್ಮಿಸಬೇಕು. ಸರ್ಕಾರಿ ಆಸ್ಪತ್ರೆಯ ಕಡೆ ಮೈದಾನದಲ್ಲಿ ಸ್ವಾತಂತ್ರ್ಯ ಭವನ ನಿರ್ಮಿಸಬೇಕು’ ಎಂಬುದು ಗಾಂಧಿ ಸ್ಮಾರಕ ಸಮಿತಿಯ ಸದಸ್ಯ ಎ.ಎಂ. ರಾಘವೇಂದ್ರ ಅವರ ಅಭಿಪ್ರಾಯ.