ಕಾಮಗಾರಿ ಪೂರ್ಣಗೊಳಿಸಿ
ಚಿಕ್ಕಬಳ್ಳಾಪುರದ ನಗರ್ತ ಪೇಟೆಯ ಹಳಾಳ್ ಗಂಡೆ ರಸ್ತೆಯಲ್ಲಿ ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದರಿಂದ ಕೊಳಚೆ ನೀರು ಹರಿದು ಹೋಗದೆ ಮಡುಗಟ್ಟಿದೆ. ದುರ್ವಾಸನೆ ಹೆಚ್ಚಿದೆ. ಗಬ್ಬೆದ್ದು ನಾರುವ ಚರಂಡಿಯಿಂದ ಜನರು ಊಟ ಮಾಡಲು ಕಷ್ಟವಾಗಿದೆ. ನಗರಸಭೆಯವರು ಈ ಭಾಗದಲ್ಲಿ ನೈರ್ಮಲ್ಯ ಕಾಪಾಡುತ್ತಿಲ್ಲ. ಈ ಸಮಸ್ಯೆ ಕುರಿತು ಅನೇಕ ಬಾರಿ ನಗರಸಭೆಯವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನಗರಸಭೆಯವರು ಇತ್ತ ಗಮನ ಹರಿಸಿ ಚರಂಡಿ ಶುಚಿಗೊಳಿಸಬೇಕು. ಅರ್ಧಕ್ಕೆ ನಿಂತಿರುವ ಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕು.
ರತ್ನಮ್ಮ, ಸ್ಥಳೀಯ ನಿವಾಸಿ