ಬೆಂಗಳೂರಿನಲ್ಲಿ ನಡೆದ ಗೌರಿ ಲಂಕೇಶ್ ಸ್ಮರಣೆಯ ಸಮಾರಂಭದ ಅತಿಥಿ- ಗಣ್ಯರ ಸಮೂಹದಲ್ಲಿ ಎಚ್.ಎಸ್. ದೊರೆಸ್ವಾಮಿ ಮತ್ತು ಪ್ರಕಾಶ್ ರೈ ಎಂಬ ಇಬ್ಬರಾದರೂ ಸ್ಥಳೀಯರಿದ್ದುದು ಕನ್ನಡಿಗರಾದ ನಮಗೆಲ್ಲ ಹೆಮ್ಮೆಯ ಸಂಗತಿ. ಈ ಸಮಾರಂಭವು, ಗೌರಿಯವರ ಕೊಲೆಯ ತನಿಖೆ ಎಲ್ಲಿಗೆ ಬಂದಿದೆ ಎಂಬ ಪ್ರಶ್ನೆಯನ್ನು ಔಪಚಾರಿಕತೆಗಾದರೂ ಕೇಳದೆ, ಬರೀ ಬಿಜೆಪಿ ವಿರೋಧಿ ಕೂಗಾಟದಲ್ಲಿ ಮುಗಿದಿರುವುದು ಪರೋಕ್ಷವಾಗಿ, ರಾಜಕೀಯವಾಗಿ ತಟಸ್ಥರಾಗಿದ್ದ ಜನರಲ್ಲಿ ಬಿಜೆಪಿ ಕುರಿತ ಸಹಾನುಭೂತಿಯನ್ನು ಹೆಚ್ಚಿಸಿದೆ. ಹೀಗಾಗಿ ಈ ಸಮಾರಂಭ ಬಿಜೆಪಿ ಬೆಂಬಲಿಗರನ್ನು ಖುಷಿಪಡಿಸುವಲ್ಲಿ ಯಶಸ್ವಿಯಾಗಿದೆ ಎಂದೇ ಹೇಳಬಹುದು.