ಶೇಖರ್ ಮಾತನಾಡಿ, ‘ನನ್ನ ಬಳಿ ಆಂಬುಲೆನ್ಸ್ ಇದೆ. ಬಶೀರ್ ಕೊಲೆಯಾದ ದಿನ ನಾನು ಕೊಟ್ಟಾರ ಚೌಕಿಗೆ ಬರುತ್ತಿದ್ದಾಗ ಯುವಕನೊಬ್ಬ ಗಾಬರಿಯಲ್ಲಿ ಮೊಬೈಲ್ನಿಂದ ಪೊಲೀಸರಿಗೆ ಕರೆ ಮಾಡುತ್ತಿದ್ದ. ಇಳಿದು ನೋಡಿದಾಗ ಬಶೀರ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆ ಕ್ಷಣಕ್ಕೆ ಅವರ ಜೀವ ಉಳಿಸಬೇಕೆಂಬ ಆಶಯದಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ದೆ’ ಎಂದರು.