ಶಾಸಕ ಸಿ.ಟಿ.ರವಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಸೋಮವಾರ ಪತ್ರ ಬಂದಿದೆ. ಮಂಗಳವಾರ ಬೆಳಿಗ್ಗೆ ಪತ್ರಗಳನ್ನು ನೋಡುತ್ತಿದ್ದಾಗ ಇದು ಕಣ್ಣಿಗೆ ಬಿತ್ತು. ವಿಎಚ್ಪಿ ಮುಖಂಡರು, ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಅವಾಚ್ಯವಾಗಿ ಬರೆದಿದ್ದಾರೆ. ನನ್ನನ್ನು, ವಿಎಚ್ಪಿ ಮುಖಂಡ ಗೋಪಾಲ್, ಮಂಗಳೂರಿನ ಇಬ್ಬರನ್ನು ಹತ್ಯೆ ಮಾಡುತ್ತೇವೆ ಎಂದು ಪತ್ರದಲ್ಲಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಅವರಿಗೆ ದೂರು ಸಲ್ಲಿಸಿದ್ದೇನೆ’ ಎಂದು ತಿಳಿಸಿದರು.