ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಪೀಠ ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಸೂಚಿಸಿ 2016ರ ಅಕ್ಟೋಬರ್ 21ರಂದು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತಲ್ಲದೆ, ವರದಿ ಸಲ್ಲಿಸುವಂತೆ ಎನ್ಐಎಗೂ ಸೂಚಿಸಿತ್ತು. ಮಹಮ್ಮದ್ ರಾಜುರ್ ರೆಹಮಾನ್ ಅಲಿಯಾಸ್ ಉಮೇಶ, ಅಫ್ಸರ್ ಪಾಶಾ ಅಲಿಯಾಸ್ ಬಶೀರುದ್ದಿನ್, ಮೊಹಮ್ಮದ್ ಇರ್ಫಾನ್ ಹಾಗೂ ಚಿ ನಜ್ಮುದ್ದಿನ್ ಅಲಿಯಾಸ್ ಮುನ್ನಾ ಅವರೇ ಪ್ರಕರಣದಲ್ಲಿ ಶಿಕ್ಷಿತರಾಗಿದ್ದು, ಎಲ್ಲರೂ ಲಷ್ಕರ್– ಎ– ತಯ್ಬಾ ಭಯೋತ್ಪಾದಕ ಸಂಘಟನೆಗೆ ಸೇರಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು.