ಪರಿಷತ್ತಿನ ಅನುದಾನ ಬಳಸಿಕೊಳ್ಳಿ: ‘ಸಾಹಿತ್ಯ ಕಾರ್ಯಕ್ರಮಗಳಿಗಾಗಿ ಹಣ ಮೀಸಲಿಟ್ಟಿರುತ್ತೇವೆ. ಇದಕ್ಕಾಗಿ ಸಾಕಷ್ಟು ಅನುದಾನಗಳು ಬರುತ್ತವೆ. ಸಾಹಿತ್ಯ ಪ್ರತಿಷ್ಠಾನಗಳು ಇವುಗಳ ಉಪಯೋಗ ಪಡೆಯಬೇಕು. ಪರಿಷತ್ತಿನ ಸಹಯೋಗ ಪಡೆದರೆ, ಇನ್ನೂ ಉತ್ತಮ ರೀತಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಬಹುದು. ಜನಗಳನ್ನು ಕರೆಸುತ್ತೇವೆ, ಬೆಳಿಗ್ಗೆಯ ಉಪಾಹಾರ ವ್ಯವಸ್ಥೆ ಮಾಡುತ್ತೇವೆ’ ಎಂದು ಬಳಿಗಾರ್ ಹೇಳಿದರು.