ಜೆಡಿಎಸ್ ವರಿಷ್ಠರು ರಾಜ್ಯದ ಬೇರೆ ಕ್ಷೇತ್ರಗಳಿಗಿಂತ ಬಂಡಾಯ ಶಾಸಕರು ಸ್ಪರ್ಧಿಸುವ 7 ಕ್ಷೇತ್ರಗಳನ್ನು ಮುಖ್ಯವಾಗಿ ಗುರಿಯಾಗಿಸಿಕೊಂಡಿದ್ದಾರೆ, ಅದರಲ್ಲೂ ನಾಗಮಂಗಲ, ಶ್ರೀರಂಗಪಟ್ಟಣ ಮತ್ತು ಮಾಗಡಿ– ಈ ಮೂರು ವಿಧಾನಸಭಾ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ, ಹೀಗಾಗಿಯೇ ಅವರು ರಾಜ್ಯ ಸುತ್ತುವುದನ್ನು ಬದಿಗಿಟ್ಟು ಈ ಕ್ಷೇತ್ರಗಳ ಸುತ್ತಲೂ ಗಿರಕಿ ಹೊಡೆಯುತ್ತಿದ್ದಾರೆ ಎಂದು ಲೇವಡಿ ಮಾಡಿದರು.