ಹೆಚ್ಚಿನ ಜನರು ಗ್ರಹಣದ ಕಾರಣಕ್ಕೆ ಬಹುಬೇಗನೆ ಮನೆ ಸೇರಿಕೊಂಡಿದ್ದರು. ಇದರಿಂದಾಗಿ ಸಂಜೆಯ ವೇಳೆಗೆ ಮಂಗಳೂರಿನ ರಸ್ತೆಗಳಲ್ಲಿ ವಾಹನ ದಟ್ಟಣೆ ಕಡಿಮೆಯಾಗಿತ್ತು. ಮೌಢ್ಯವನ್ನು ವಿರೋಧಿಸುವ ವಿವಿಧ ಸಂಘಟನೆಗಳು ಮತ್ತು ಗುಂಪುಗಳ ಸದಸ್ಯರು ವಿಚಾರವಾದಿ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್ ನೇತೃತ್ವದಲ್ಲಿ ಗ್ರಹಣದ ನಡುವೆಯೇ ತಿಂಡಿ, ತಿನಿಸುಗಳನ್ನು ಸೇವಿಸಿದರು.